July 14, 2016
February 6, 2015
ಹಸಿವು ಮತ್ತು ಕಳ್ಳತನ
ಅಮವಾಸ್ಸೆ ಕತ್ತಲು, ಹಟ್ಟಿಯೆಲ್ಲ ಬರಿದು
ಹಸಿದ ಹೊಟ್ಟೆಗಳು
ಊರಾಚೆ ಗೌಡನ ಹೊಲದ ಕಡ್ಲೆಕಾಯಿ ಗಿಡಗಳ
ಹಾದಿ ಹಿಡಿದು ಹೊರಟವು;
ಕತ್ತಲಲ್ಲಿ ತಡಕಿ, ಹುಡುಕಿ
ಕಡ್ಲೆಕಾಯಿ ಗಿಡಗಳ ಕಿತ್ತು ತಂದವು
ಹಟ್ಟಿಯೊಳಗೆ ಹಸಿವು ನೀಗುವ ಸಂಭ್ರಮದಲ್ಲೇ
ನುಗ್ಗಿ ಬಂದವು ಗೌಡನ ಆಳುಗಳು
ಹಟ್ಟಿಯನ್ನೆಲ್ಲಾ ಕೆಡವಿ, ಕೊಡವಿ
ಸುಲಿದ ಬೀಜ, ಬಿಡಿಸಿದ ಕಡಲೆಕಾಯಿ,
ತಿನ್ನುತ್ತಿದ್ದ ಬಾಯಿಗಳಿಂದ ಕಸಿದು, ಹೊಡೆದು ಬಡಿದು
ಎಳೆದೊಯ್ದರು ಪೋಲೀಸ್ ಸ್ಟೇಷನ್ನಿಗೆ
ಅಲ್ಲಿಂದ ಮುಂದೆ ಕೋರ್ಟಿಗೆ
ಜಡ್ಜ್ ಸಾಹೇಬರು ಕೇಳಿದರು
ಏನ್ರಪ್ಪಾ ಕಡಲೆಕಾಯಿ ಕದ್ರಂತೆ ಹೌದಾ?
ಸ್ವಾಮಿ, ನಾವಲ್ಲ,..; ಹಸಿವು,
ಹಸಿವು ನಮ್ಮದಲ್ಲ, ಕದ್ದವರು ನಾವಲ್ಲ
ನಮ್ಮನ್ನು ಬಿಡಿ, ನಾವು ಅಮಾಯಕರು...
ಹಸಿದ ಹೊಟ್ಟೆಗಳು
ಊರಾಚೆ ಗೌಡನ ಹೊಲದ ಕಡ್ಲೆಕಾಯಿ ಗಿಡಗಳ
ಹಾದಿ ಹಿಡಿದು ಹೊರಟವು;
ಕತ್ತಲಲ್ಲಿ ತಡಕಿ, ಹುಡುಕಿ
ಕಡ್ಲೆಕಾಯಿ ಗಿಡಗಳ ಕಿತ್ತು ತಂದವು
ಹಟ್ಟಿಯೊಳಗೆ ಹಸಿವು ನೀಗುವ ಸಂಭ್ರಮದಲ್ಲೇ
ನುಗ್ಗಿ ಬಂದವು ಗೌಡನ ಆಳುಗಳು
ಹಟ್ಟಿಯನ್ನೆಲ್ಲಾ ಕೆಡವಿ, ಕೊಡವಿ
ಸುಲಿದ ಬೀಜ, ಬಿಡಿಸಿದ ಕಡಲೆಕಾಯಿ,
ತಿನ್ನುತ್ತಿದ್ದ ಬಾಯಿಗಳಿಂದ ಕಸಿದು, ಹೊಡೆದು ಬಡಿದು
ಎಳೆದೊಯ್ದರು ಪೋಲೀಸ್ ಸ್ಟೇಷನ್ನಿಗೆ
ಅಲ್ಲಿಂದ ಮುಂದೆ ಕೋರ್ಟಿಗೆ
ಜಡ್ಜ್ ಸಾಹೇಬರು ಕೇಳಿದರು
ಏನ್ರಪ್ಪಾ ಕಡಲೆಕಾಯಿ ಕದ್ರಂತೆ ಹೌದಾ?
ಸ್ವಾಮಿ, ನಾವಲ್ಲ,..; ಹಸಿವು,
ಹಸಿವು ನಮ್ಮದಲ್ಲ, ಕದ್ದವರು ನಾವಲ್ಲ
ನಮ್ಮನ್ನು ಬಿಡಿ, ನಾವು ಅಮಾಯಕರು...
_____________________________________
- ಭಾಸ್ಕರ್ ನರಸಿಂಹಯ್ಯ
November 14, 2013
ಇಳಿಸಂಜೆ,
ಏರುತಿರುವ ಕಾವು
ಅವಳು ಬದುಕಿದ್ದರೆ ಚೆನ್ನಿತ್ತು;
ಮನಸ್ಸಿಗಿವಳು ಮೈಲಿಗೆ.
ದೇಹ ತೀಡುತಿದೆ
ಮನಸ ಮೂಲೆಗೆ ನೂಕಿ;
ಇವಳ ಸಖ್ಯ ಬಯಸಿದೆ ದೇಹ
ಜಾತಿ ಕಂದಕವ ಮೀರಿ.
ಯಾವ ದುರಾತ್ಮರ ಕಟ್ಟಳೆಯೋ
ಮನುಷ್ಯರ ನಡುವೆ ಕಂದಕ ತೋಡಿ ಹಿಂಡುತಿದೆ;
ದೇಹಕೆ ಬೇಡದ ಜಾತಿ, ಮೈಲಿಗೆ
ಮನಸ ಬಂಧಿಸಿ ಕೂರಿಸಿವೆ.
ಅವಳ ಹಿಂದೆಯೇ ಈ ದಾಹವೂ
ಹೋಗಿದ್ದರೆ ಸರಿಯಿತ್ತು;
ಇಲ್ಲ, ಇವಳೊಂದಿಗಿನ ಸಖ್ಯ ಸರಿಯೆಂದು
ಹೇಳುವವರು ಬೇಕಿತ್ತು.
ಈ ಜಾತಿ, ಈ ಮೈಲಿಗೆಯ ಹುಳವ
ಹುಟ್ಟಿಸಿದವರು ನಿರ್ದೇಹಿಗಳೇ? ಅಥವ
ಮನೋನಿಗ್ರಹಿಗಳೆಂಬ ಅಹಂಕಾರಿಗಳೇ?
ಮನಸ ಹೊತ್ತು ದೇಹ ನಡೆವುದೇ ? ಅಥವ
ಮನಸೇ ದೇಹವ ಹೊತ್ತು ನಡೆವುದೇ ?
------------------------------ ---------
~ ಎನ್. ಭಾಸ್ಕರ್
The poem captures the tussle between the desirous mind and the conscience, that we face in all facets our lives; and the ways of the mind to seek approval of the forbidden. Dr. S. L. Bhyrappa in his classic novel, Daatu(ದಾಟು) has portrayed this tussle of the mind in the backdrop of conformist society, in a character.
ಇದು ಎಸ್.ಎಲ್. ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಪಾತ್ರವೊಂದರ ತೊಳಲಾಟದಿಂದ ಪ್ರೇರಿತ ಕವನ.
ಏರುತಿರುವ ಕಾವು
ಅವಳು ಬದುಕಿದ್ದರೆ ಚೆನ್ನಿತ್ತು;
ಮನಸ್ಸಿಗಿವಳು ಮೈಲಿಗೆ.
ದೇಹ ತೀಡುತಿದೆ
ಮನಸ ಮೂಲೆಗೆ ನೂಕಿ;
ಇವಳ ಸಖ್ಯ ಬಯಸಿದೆ ದೇಹ
ಜಾತಿ ಕಂದಕವ ಮೀರಿ.
ಯಾವ ದುರಾತ್ಮರ ಕಟ್ಟಳೆಯೋ
ಮನುಷ್ಯರ ನಡುವೆ ಕಂದಕ ತೋಡಿ ಹಿಂಡುತಿದೆ;
ದೇಹಕೆ ಬೇಡದ ಜಾತಿ, ಮೈಲಿಗೆ
ಮನಸ ಬಂಧಿಸಿ ಕೂರಿಸಿವೆ.
ಅವಳ ಹಿಂದೆಯೇ ಈ ದಾಹವೂ
ಹೋಗಿದ್ದರೆ ಸರಿಯಿತ್ತು;
ಇಲ್ಲ, ಇವಳೊಂದಿಗಿನ ಸಖ್ಯ ಸರಿಯೆಂದು
ಹೇಳುವವರು ಬೇಕಿತ್ತು.
ಈ ಜಾತಿ, ಈ ಮೈಲಿಗೆಯ ಹುಳವ
ಹುಟ್ಟಿಸಿದವರು ನಿರ್ದೇಹಿಗಳೇ? ಅಥವ
ಮನೋನಿಗ್ರಹಿಗಳೆಂಬ ಅಹಂಕಾರಿಗಳೇ?
ಮನಸ ಹೊತ್ತು ದೇಹ ನಡೆವುದೇ ? ಅಥವ
ಮನಸೇ ದೇಹವ ಹೊತ್ತು ನಡೆವುದೇ ?
------------------------------
~ ಎನ್. ಭಾಸ್ಕರ್
The poem captures the tussle between the desirous mind and the conscience, that we face in all facets our lives; and the ways of the mind to seek approval of the forbidden. Dr. S. L. Bhyrappa in his classic novel, Daatu(ದಾಟು) has portrayed this tussle of the mind in the backdrop of conformist society, in a character.
ಇದು ಎಸ್.ಎಲ್. ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಪಾತ್ರವೊಂದರ ತೊಳಲಾಟದಿಂದ ಪ್ರೇರಿತ ಕವನ.
ನಿನ್ನ ಕಾಣುವ
ನಿನ್ನ ದನಿಯ ಕೇಳುವ
ಹಂಬಲ ನನ್ನಲ್ಲಿ…
ಘ್ರಾಣಿಸಬಲ್ಲೆ
ನೀನೆಲ್ಲಿ ಸುಳಿದರೂ
ನಿನ್ನ ಮೈಯ್ಯ ವಾಸನೆಯ
ನೀ ಬಿಟ್ಟ
ಕೋಣೆಯ ಪ್ರವೇಶದಲ್ಲೇ…
ಕಂಡು ಹಿಡಿಯಬಲ್ಲೆ
ಏಳುವ ನಿನ್ನ
ಹಿಮ್ಮಡಿಗಳ
ಚಲಿಸುವ ನಿನ್ನ ಪಾದಗಳ
ಗಾಳಿಯ ಚಲನೆಯಲ್ಲೇ…
ಅರಿಯಬಲ್ಲೆ
ನಿನ್ನ ಮುತ್ತಿನ ಮತ್ತಲ್ಲೇ
ನಿನ್ನ ತುಟಿಗಳು
ಕೂಡುವ ತೆರೆಯುವ ಪರಿಯ
ನಿನ್ನೊಳಗಿಳಿದು ಮುತ್ತಿಡುವಲ್ಲೇ…
ಕಡೆಗೆ 'ಇನ್ನೂ' ಎಂದು
ನೀ ಪಿಸುಗುಡುವ
ಆ ಆನಂದವ ಕೂಡ…
-------------------------
~ ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್
I want to see you.
Know your voice.
Recognize you when you
first come 'round the corner.
Sense your scent when I come
into a room you've just left.
Know the lift of your heel,
the glide of your foot.
Become familiar with the way
you purse your lips
then let them part,
just the slightest bit,
when I lean in to your space
and kiss you.
I want to know the joy
of how you whisper
"more
---------------------------
~ Rumi
ನಿನ್ನ ದನಿಯ ಕೇಳುವ
ಹಂಬಲ ನನ್ನಲ್ಲಿ…
ಘ್ರಾಣಿಸಬಲ್ಲೆ
ನೀನೆಲ್ಲಿ ಸುಳಿದರೂ
ನಿನ್ನ ಮೈಯ್ಯ ವಾಸನೆಯ
ನೀ ಬಿಟ್ಟ
ಕೋಣೆಯ ಪ್ರವೇಶದಲ್ಲೇ…
ಕಂಡು ಹಿಡಿಯಬಲ್ಲೆ
ಏಳುವ ನಿನ್ನ
ಹಿಮ್ಮಡಿಗಳ
ಚಲಿಸುವ ನಿನ್ನ ಪಾದಗಳ
ಗಾಳಿಯ ಚಲನೆಯಲ್ಲೇ…
ಅರಿಯಬಲ್ಲೆ
ನಿನ್ನ ಮುತ್ತಿನ ಮತ್ತಲ್ಲೇ
ನಿನ್ನ ತುಟಿಗಳು
ಕೂಡುವ ತೆರೆಯುವ ಪರಿಯ
ನಿನ್ನೊಳಗಿಳಿದು ಮುತ್ತಿಡುವಲ್ಲೇ…
ಕಡೆಗೆ 'ಇನ್ನೂ' ಎಂದು
ನೀ ಪಿಸುಗುಡುವ
ಆ ಆನಂದವ ಕೂಡ…
-------------------------
~ ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್
I want to see you.
Know your voice.
Recognize you when you
first come 'round the corner.
Sense your scent when I come
into a room you've just left.
Know the lift of your heel,
the glide of your foot.
Become familiar with the way
you purse your lips
then let them part,
just the slightest bit,
when I lean in to your space
and kiss you.
I want to know the joy
of how you whisper
"more
---------------------------
~ Rumi
ಚಂದ್ರನೋ ನಭದ ಹೆಣ್ಣಂತೆ
ಭುವಿಯೂ ಸಹ
ಸೂರ್ಯನ ಮೋಹ ಇವರಿಬ್ಬರಿಗೂ
ಚಂದ್ರನಿಗೋ ಆವರ್ತಿಸುವ
ಚಕ್ರಗಳು
ಶುಕ್ಲಪಕ್ಷದ ಒಲವು
ಕ್ರಷ್ಣಪಕ್ಷದ ವಿರಹ
ಭುವಿಗೂ
ವಸಂತ, ಹೇಮಂತ, ಗ್ರೀಷ್ಮ, ಶಿಶಿರ
ಋತುಚಕ್ರಗಳು,
ಪ್ರಕೃತಿಯ ಋತುಚಕ್ರಗಳಂತೆ;
ಪುರುಷ ಪ್ರಕೃತಿಯ ಸೆಳೆವಂತೆ,
ಈ ನಭದ ಕನ್ನಿಕೆಯರು
ಸೂರ್ಯನ ಸೆಳೆತದಲ್ಲೇ
ಪರಿಭ್ರಮಿಸುವರು
ಮೋಹದಲ್ಲಿ,
ಪ್ರಕೃತಿ ಪುರುಷನ
ಮೋಹದಲ್ಲಿ ಪರಿಭ್ರಮಿಸುವಂತೆ.
-------------------------
~ ಎನ್. ಭಾಸ್ಕರ್
ಭುವಿಯೂ ಸಹ
ಸೂರ್ಯನ ಮೋಹ ಇವರಿಬ್ಬರಿಗೂ
ಚಂದ್ರನಿಗೋ ಆವರ್ತಿಸುವ
ಚಕ್ರಗಳು
ಶುಕ್ಲಪಕ್ಷದ ಒಲವು
ಕ್ರಷ್ಣಪಕ್ಷದ ವಿರಹ
ಭುವಿಗೂ
ವಸಂತ, ಹೇಮಂತ, ಗ್ರೀಷ್ಮ, ಶಿಶಿರ
ಋತುಚಕ್ರಗಳು,
ಪ್ರಕೃತಿಯ ಋತುಚಕ್ರಗಳಂತೆ;
ಪುರುಷ ಪ್ರಕೃತಿಯ ಸೆಳೆವಂತೆ,
ಈ ನಭದ ಕನ್ನಿಕೆಯರು
ಸೂರ್ಯನ ಸೆಳೆತದಲ್ಲೇ
ಪರಿಭ್ರಮಿಸುವರು
ಮೋಹದಲ್ಲಿ,
ಪ್ರಕೃತಿ ಪುರುಷನ
ಮೋಹದಲ್ಲಿ ಪರಿಭ್ರಮಿಸುವಂತೆ.
-------------------------
~ ಎನ್. ಭಾಸ್ಕರ್
पिबन्ति नद्य: स्वयमेव नाम्भ:
स्वयम् न खादन्ति फलानि वृक्षा:|
नादन्ति सस्यं खलु वारिवाहा :
परोपकाराय सतां विभूतय :||
Rivers do not drink their own water, nor do trees eat their own fruit, nor do rain clouds eat the grains reared by them. The wealth of the noble is used solely for the benefit of others!
स्वयम् न खादन्ति फलानि वृक्षा:|
नादन्ति सस्यं खलु वारिवाहा :
परोपकाराय सतां विभूतय :||
Rivers do not drink their own water, nor do trees eat their own fruit, nor do rain clouds eat the grains reared by them. The wealth of the noble is used solely for the benefit of others!
ಲೀಲೆ
========
ನೀರ ಹನಿ
ತಾವರೆ
ಎಲೆಯೊಂದಿಗೆ
ಸರಸದಿ
ಮುತ್ತಾಗಿ
ಬೆಳಕ
ಮಧುವ ಹೀರಿ
ಬಣ್ಣಗಳ ಬೀರಿ
ಕುಣಿದು
ಕುಪ್ಪಳಿಸುತ್ತಾ
ನಲಿದು ಬೀಗುತ್ತಿತ್ತು;
ಎಲೆ ಬಾಗಿ
ಗಾಳಿಗೆ
ಅದು
ನೀರಲ್ಲಿ ಕರಗಿ
ಒಂದಾಗುವ
ವರೆಗೆ
-----------------
~ ಎನ್. ಭಾಸ್ಕರ್
The Poem is a summary of a speck of energy assuming life and indulging in the the creation; finding happiness and joy of living; discovering pain and turmoil of survival; and at last, the liberation of getting absorbed in to the vast expance of the Singular Ocean of Consciousness.
Well that's the play of life longing for itself.
========
ನೀರ ಹನಿ
ತಾವರೆ
ಎಲೆಯೊಂದಿಗೆ
ಸರಸದಿ
ಮುತ್ತಾಗಿ
ಬೆಳಕ
ಮಧುವ ಹೀರಿ
ಬಣ್ಣಗಳ ಬೀರಿ
ಕುಣಿದು
ಕುಪ್ಪಳಿಸುತ್ತಾ
ನಲಿದು ಬೀಗುತ್ತಿತ್ತು;
ಎಲೆ ಬಾಗಿ
ಗಾಳಿಗೆ
ಅದು
ನೀರಲ್ಲಿ ಕರಗಿ
ಒಂದಾಗುವ
ವರೆಗೆ
-----------------
~ ಎನ್. ಭಾಸ್ಕರ್
The Poem is a summary of a speck of energy assuming life and indulging in the the creation; finding happiness and joy of living; discovering pain and turmoil of survival; and at last, the liberation of getting absorbed in to the vast expance of the Singular Ocean of Consciousness.
Well that's the play of life longing for itself.
ಮೋಹಕ
ಚಂದ್ರನನ್ನೇ
ಮೀರಿಸುವ ನಿನ್ನ ವದನ
ಸುಂದರ ಕಮಲಗಳನ್ನೇ
ಅಣಕಿಸುವ
ನಿನ್ನ ಕಣ್ಣುಗಳು
ಹೊನ್ನಿಗೇ
ಗ್ರಹಣಹಿಡಿಸುವ
ನಿನ್ನ ಮೈಕಾಂತಿ
ದುಂಬಿಗಳನ್ನೇ
ನಾಚಿಸುವ ನಿನ್ನ
ದಟ್ಟ ಮುಂಗುರುಳು
ಕರಿಸಿರಿಯಂಥ
ನಿನ್ನ ಕುಚಗಳು,
ಘನ ಜಘನಗಳು
ಮಧುರವಾದ
ನಿನ್ನ ಕೋಮಲ ಧ್ವನಿ
ಇವೆಲ್ಲವನ್ನೂ
ಅಲಂಕರಿಸಿರುವ
ನಿನ್ನ ಹೇಗೆ
ತುಂಬಿಕೊಳ್ಳುವುದೇ ಸಖೀ.
--------------
~ ಭರ್ತೃಹರಿ
--------------
ಕನ್ನಡಕ್ಕೆ: ~ ಎನ್. ಭಾಸ್ಕರ್
English version of this verse:
verse 90
A face to rival the moon,
Eyes that make mockery of lotuses,
Complexion eclipsing gold's luster,
Thick tresses that shame the black bee,
Breasts like elephant's swelling bosses,
Heavy hips,
A voice enchanting and soft —
The adornment in maidens is natural.
~ Bhartrihari
ಚಂದ್ರನನ್ನೇ
ಮೀರಿಸುವ ನಿನ್ನ ವದನ
ಸುಂದರ ಕಮಲಗಳನ್ನೇ
ಅಣಕಿಸುವ
ನಿನ್ನ ಕಣ್ಣುಗಳು
ಹೊನ್ನಿಗೇ
ಗ್ರಹಣಹಿಡಿಸುವ
ನಿನ್ನ ಮೈಕಾಂತಿ
ದುಂಬಿಗಳನ್ನೇ
ನಾಚಿಸುವ ನಿನ್ನ
ದಟ್ಟ ಮುಂಗುರುಳು
ಕರಿಸಿರಿಯಂಥ
ನಿನ್ನ ಕುಚಗಳು,
ಘನ ಜಘನಗಳು
ಮಧುರವಾದ
ನಿನ್ನ ಕೋಮಲ ಧ್ವನಿ
ಇವೆಲ್ಲವನ್ನೂ
ಅಲಂಕರಿಸಿರುವ
ನಿನ್ನ ಹೇಗೆ
ತುಂಬಿಕೊಳ್ಳುವುದೇ ಸಖೀ.
--------------
~ ಭರ್ತೃಹರಿ
--------------
ಕನ್ನಡಕ್ಕೆ: ~ ಎನ್. ಭಾಸ್ಕರ್
English version of this verse:
verse 90
A face to rival the moon,
Eyes that make mockery of lotuses,
Complexion eclipsing gold's luster,
Thick tresses that shame the black bee,
Breasts like elephant's swelling bosses,
Heavy hips,
A voice enchanting and soft —
The adornment in maidens is natural.
~ Bhartrihari
Subscribe to:
Posts (Atom)