November 14, 2013

ಇಳಿಸಂಜೆ,
ಏರುತಿರುವ ಕಾವು
ಅವಳು ಬದುಕಿದ್ದರೆ ಚೆನ್ನಿತ್ತು;
ಮನಸ್ಸಿಗಿವಳು ಮೈಲಿಗೆ.
ದೇಹ ತೀಡುತಿದೆ
ಮನಸ ಮೂಲೆಗೆ ನೂಕಿ;
ಇವಳ ಸಖ್ಯ ಬಯಸಿದೆ ದೇಹ
ಜಾತಿ ಕಂದಕವ ಮೀರಿ.
ಯಾವ ದುರಾತ್ಮರ ಕಟ್ಟಳೆಯೋ
ಮನುಷ್ಯರ ನಡುವೆ ಕಂದಕ ತೋಡಿ ಹಿಂಡುತಿದೆ;
ದೇಹಕೆ ಬೇಡದ ಜಾತಿ, ಮೈಲಿಗೆ
ಮನಸ ಬಂಧಿಸಿ ಕೂರಿಸಿವೆ.
ಅವಳ ಹಿಂದೆಯೇ ಈ ದಾಹವೂ
ಹೋಗಿದ್ದರೆ ಸರಿಯಿತ್ತು;
ಇಲ್ಲ, ಇವಳೊಂದಿಗಿನ ಸಖ್ಯ ಸರಿಯೆಂದು
ಹೇಳುವವರು ಬೇಕಿತ್ತು.
ಈ ಜಾತಿ, ಈ ಮೈಲಿಗೆಯ ಹುಳವ
ಹುಟ್ಟಿಸಿದವರು ನಿರ್ದೇಹಿಗಳೇ? ಅಥವ
ಮನೋನಿಗ್ರಹಿಗಳೆಂಬ ಅಹಂಕಾರಿಗಳೇ?
ಮನಸ ಹೊತ್ತು ದೇಹ ನಡೆವುದೇ ? ಅಥವ
ಮನಸೇ ದೇಹವ ಹೊತ್ತು ನಡೆವುದೇ ?
---------------------------------------
~ ಎನ್. ಭಾಸ್ಕರ್


The poem captures the tussle between the desirous mind and the conscience, that we face in all facets our lives; and the ways of the mind to seek approval of the forbidden. Dr. S. L. Bhyrappa in his classic novel, Daatu(ದಾಟು) has portrayed this tussle of the mind in the backdrop of conformist society, in a character.
ಇದು ಎಸ್.ಎಲ್. ಭೈರಪ್ಪನವರ ದಾಟು ಕಾದಂಬರಿಯಲ್ಲಿ ಬರುವ ಪಾತ್ರವೊಂದರ ತೊಳಲಾಟದಿಂದ ಪ್ರೇರಿತ ಕವನ.
ಅರಿವಿನ ಇರವ ತಾನರಿಯಲದು ಅರಿದಿಹುದು
ಅರಿವಿನಾ ತೆರನ ಅರಿಯುವಡೆ ತಾ ತನ್ನ
ಅರಿಯದನರಿಯ ಸರ್ವಜ್ಞ

Unless you know yourself, there is no way would you know the ways of Consciousness. Sarvgna.
-------------------------
English
meaning: N Bhaskar
ಸತ್ಯದ
ಮುಖವಾಡ
ಬಿದ್ದರೆ
ಸುಳ್ಳಾದೀತೆ?

ತೊಳೆದ
ಕನ್ನಡಿಯಂತೆ
ತೊಳೆದಷ್ಟೂ
ಹೊಳಪು !

ಪುಟಕ್ಕಿಟ್ಟ
ಹೊನ್ನಿನಂತೆ
ಬೆಂದಷ್ಟೂ
ಹೊಳಪು

ಸೌಂದರ್ಯ
ಅಂತರಂಗದ
ಸೌಂದರ್ಯ
ತೊಯ್ದಷ್ಟೂ ಸ್ನಿಗ್ಧ,

ಸುಂದರ !
---------------
~ ಎನ್. ಭಾಸ್ಕರ್
ಬದುಕ
ಹಾದಿಯೇ ಹಾಗೆ;
ಕ್ಷಣ ಕ್ಷಣವೂ
ಅನುಭವ
ಸಿಹಿಯ ಅಂತರಾಳದ ಕಹಿ
ಕಹಿಯ ತಿರುಳ ಸಿಹಿ
ಕಡೆಗೆ
ಕಹಿಯಲ್ಲದ ಕಹಿ
ಸಿಹಿಯಲ್ಲದ ಸಿಹಿ
ಎಲ್ಲವೂ ಒಂದೇ
ತೆರನಾದ
ಅನುಭಾವ
---------------------
~ ಎನ್. ಭಾಸ್ಕರ್
ಬದುಕ
ಹಾದಿಯೇ ಹಾಗೆ;
ಕ್ಷಣ ಕ್ಷಣವೂ
ಅನುಭವ
ಸಿಹಿಯ ಅಂತರಾಳದ ಕಹಿ
ಕಹಿಯ ತಿರುಳ ಸಿಹಿ
ಕಡೆಗೆ
ಕಹಿಯಲ್ಲದ ಕಹಿ
ಸಿಹಿಯಲ್ಲದ ಸಿಹಿ
ಎಲ್ಲವೂ ಒಂದೇ
ತೆರನಾದ
ಅನುಭಾವ
---------------------
~ ಎನ್. ಭಾಸ್ಕರ್
ನಿನ್ನ ಕಾಣುವ
ನಿನ್ನ ದನಿಯ ಕೇಳುವ
ಹಂಬಲ ನನ್ನಲ್ಲಿ…

ಘ್ರಾಣಿಸಬಲ್ಲೆ
ನೀನೆಲ್ಲಿ ಸುಳಿದರೂ
ನಿನ್ನ ಮೈಯ್ಯ ವಾಸನೆಯ
ನೀ ಬಿಟ್ಟ
ಕೋಣೆಯ ಪ್ರವೇಶದಲ್ಲೇ…

ಕಂಡು ಹಿಡಿಯಬಲ್ಲೆ
ಏಳುವ ನಿನ್ನ
ಹಿಮ್ಮಡಿಗಳ
ಚಲಿಸುವ ನಿನ್ನ ಪಾದಗಳ
ಗಾಳಿಯ ಚಲನೆಯಲ್ಲೇ…

ಅರಿಯಬಲ್ಲೆ
ನಿನ್ನ ಮುತ್ತಿನ ಮತ್ತಲ್ಲೇ
ನಿನ್ನ ತುಟಿಗಳು
ಕೂಡುವ ತೆರೆಯುವ ಪರಿಯ
ನಿನ್ನೊಳಗಿಳಿದು ಮುತ್ತಿಡುವಲ್ಲೇ…

ಕಡೆಗೆ 'ಇನ್ನೂ' ಎಂದು
ನೀ ಪಿಸುಗುಡುವ
ಆ ಆನಂದವ ಕೂಡ…
-------------------------
~ ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್

I want to see you.

Know your voice.

Recognize you when you
first come 'round the corner.

Sense your scent when I come
into a room you've just left.

Know the lift of your heel,
the glide of your foot.

Become familiar with the way
you purse your lips
then let them part,
just the slightest bit,
when I lean in to your space
and kiss you.

I want to know the joy
of how you whisper
"more
---------------------------

   ~ Rumi
ನಿನ್ನೊಳು ನಾನು,
ನಾನೇ ನೀನು;
ಅರ್ಥವಾಗುವುದಲ್ಲ ಬಿಡಿ,
ನಿನ್ನ ಮನಸ ಬಿಡುವವರೆಗೆ.
----------------------
~ರೂಮಿ
ಕನ್ನಡಕ್ಕೆ: ~ ಎನ್. ಭಾಸ್ಕರ್


Iam in you and Iam you
No one can understand this
Until he has lost his mind
--------------------------
~Rumi
ವಾಸ್ತವ(?)ವೇ ಹೀಗೆ
ಬೆಳಕಿನೊಡಲಿನ ಕತ್ತಲು
ಸತ್ಯದೊಳಗಿನ ಮಿಥ್ಯ
ಮರೀಚಿಕೆಯೊಳಗಿನ ಭರವಸೆ
ನಮ್ಮ ದುಃಖ, ನಮ್ಮ ಸುಖ
ಎಲ್ಲವೂ…
ಕರಗಿ ಒಂದಾಗುವವರೆಗೆ
in to Singular Consciousness.
------------------------------

~ ಎನ್. ಭಾಸ್ಕರ್
ಚಂದ್ರನೋ ನಭದ ಹೆಣ್ಣಂತೆ
ಭುವಿಯೂ ಸಹ
ಸೂರ್ಯನ ಮೋಹ ಇವರಿಬ್ಬರಿಗೂ
ಚಂದ್ರನಿಗೋ ಆವರ್ತಿಸುವ
ಚಕ್ರಗಳು
ಶುಕ್ಲಪಕ್ಷದ ಒಲವು
ಕ್ರಷ್ಣಪಕ್ಷದ ವಿರಹ
ಭುವಿಗೂ
ವಸಂತ, ಹೇಮಂತ, ಗ್ರೀಷ್ಮ, ಶಿಶಿರ
ಋತುಚಕ್ರಗಳು,
ಪ್ರಕೃತಿಯ ಋತುಚಕ್ರಗಳಂತೆ;
ಪುರುಷ ಪ್ರಕೃತಿಯ ಸೆಳೆವಂತೆ,
ಈ ನಭದ ಕನ್ನಿಕೆಯರು
ಸೂರ್ಯನ ಸೆಳೆತದಲ್ಲೇ
ಪರಿಭ್ರಮಿಸುವರು
ಮೋಹದಲ್ಲಿ,
ಪ್ರಕೃತಿ ಪುರುಷನ
ಮೋಹದಲ್ಲಿ ಪರಿಭ್ರಮಿಸುವಂತೆ.
-------------------------
~ ಎನ್. ಭಾಸ್ಕರ್
ಬುದ್ಧ,
ಇದು ಬೆಳಕಲ್ಲ;
ತಿಮಿರವೂ ಅಲ್ಲ;
ಖುಷಿಯ ಗಮ್ಯವೂ ಅಲ್ಲ;
ಅವ ಗಮಿಸಿದ ಹಾದಿಯ ಧೂಳ
ಖುಷಿಯ ತುಣುಕುಗಳೂ ಅಲ್ಲ;
ಅದೂ ಏನೂ ಇರದ
ಬರಿದಾಗಿರುವ
ಎಲ್ಲರೊಳಗೊಂದಾಗಿರುವ
ತಿಳಿಮನ.
----------------------
~ ಎನ್. ಭಾಸ್ಕರ್
ಬುದ್ಧಿ ಮತ್ತು ಮನಸ್ಸುಗಳ
ತಾಕಲಾಟದಲ್ಲಿ
ವೈಯುಕ್ತಿಕವಾಗಿ ಮನಸ್ಸನ್ನು,
ಸಾರ್ವಜನಿಕವಾಗಿ ಬುದ್ಧಿಯನ್ನು
ಹಿಂಬಾಲಿಸುವ
ಇಬ್ಬಂದಿತನವೇ indulgence;
ವ್ಯತಿರಿಕ್ತವೇ ಧ್ಯಾನ;
ಎರಡರಲ್ಲೂ
ಒಂದನ್ನೇ ಕಾಣುವುದು Consciousness.
...and indulgence is Beautiful !

~ಎನ್. ಭಾಸ್ಕರ್
पिबन्ति नद्य: स्वयमेव नाम्भ:
स्वयम् न खादन्ति फलानि वृक्षा:|
नादन्ति सस्यं खलु वारिवाहा :
परोपकाराय सतां विभूतय :||

Rivers do not drink their own water, nor do trees eat their own fruit, nor do rain clouds eat the grains reared by them. The wealth of the noble is used solely for the benefit of others!
ಬುದ್ಧಿಯಿಂದ
ಜೀವನದ ಗಮ್ಯಗಳನ್ನು
ಅರಿಯಬಹುದೇ ವಿನಹಃ
ಅದರಲ್ಲಿ ಪ್ರಯಾಣಿಸಲಾಗದು.
---------------------
~ಎನ್. ಭಾಸ್ಕರ್
ನನ್ನಲ್ಲಿ
ಬೆಳಗಲೆಂದು
ನೀ ಕೊಟ್ಟ
ಮಿಂಚು ಹುಳಗಳು
ಕಣ್ಣ ಮುಚ್ಚಿ
ಕುಳಿತಿವೆ
ಹಾರಾಡದೆ
ತನ್ಮಯವಾಗಿ
ಧ್ಯಾನದಲ್ಲಿ
ತಮ್ಮೆಲ್ಲ
ಬೆಳಕಿನ ಗುಚ್ಚದಲ್ಲಿ
ರಮಿಸಲು
ನಿನ್ನಂತೆ
ನೀ ನಿರದ ಹೊತ್ತಿನಲ್ಲಿ.
-------------------------
~ ಎನ್. ಭಾಸ್ಕರ್
ಲೀಲೆ
========
ನೀರ ಹನಿ
ತಾವರೆ
ಎಲೆಯೊಂದಿಗೆ
ಸರಸದಿ
ಮುತ್ತಾಗಿ
ಬೆಳಕ
ಮಧುವ ಹೀರಿ
ಬಣ್ಣಗಳ ಬೀರಿ
ಕುಣಿದು
ಕುಪ್ಪಳಿಸುತ್ತಾ
ನಲಿದು ಬೀಗುತ್ತಿತ್ತು;
ಎಲೆ ಬಾಗಿ
ಗಾಳಿಗೆ
ಅದು
ನೀರಲ್ಲಿ ಕರಗಿ
ಒಂದಾಗುವ
ವರೆಗೆ
-----------------
~ ಎನ್. ಭಾಸ್ಕರ್


The Poem is a summary of a speck of energy assuming life and indulging in the the creation; finding happiness and joy of living; discovering pain and turmoil of survival; and at last, the liberation of getting absorbed in to the vast expance of the Singular Ocean of Consciousness.

Well that's the play of life longing for itself.
ಮೋಹಕ
ಚಂದ್ರನನ್ನೇ
ಮೀರಿಸುವ ನಿನ್ನ ವದನ
ಸುಂದರ ಕಮಲಗಳನ್ನೇ
ಅಣಕಿಸುವ
ನಿನ್ನ ಕಣ್ಣುಗಳು
ಹೊನ್ನಿಗೇ
ಗ್ರಹಣಹಿಡಿಸುವ
ನಿನ್ನ ಮೈಕಾಂತಿ
ದುಂಬಿಗಳನ್ನೇ
ನಾಚಿಸುವ ನಿನ್ನ
ದಟ್ಟ ಮುಂಗುರುಳು
ಕರಿಸಿರಿಯಂಥ
ನಿನ್ನ ಕುಚಗಳು,
ಘನ ಜಘನಗಳು
ಮಧುರವಾದ
ನಿನ್ನ ಕೋಮಲ ಧ್ವನಿ
ಇವೆಲ್ಲವನ್ನೂ
ಅಲಂಕರಿಸಿರುವ
ನಿನ್ನ ಹೇಗೆ
ತುಂಬಿಕೊಳ್ಳುವುದೇ ಸಖೀ.
--------------
~ ಭರ್ತೃಹರಿ
--------------
ಕನ್ನಡಕ್ಕೆ: ~ ಎನ್. ಭಾಸ್ಕರ್

English version of this verse:

verse 90

A face to rival the moon,
Eyes that make mockery of lotuses,
Complexion eclipsing gold's luster,
Thick tresses that shame the black bee,
Breasts like elephant's swelling bosses,
Heavy hips,
A voice enchanting and soft —
The adornment in maidens is natural.

~ Bhartrihari
ಮನಸ್ಸು ಮರ್ಕಟ!
ಅರಿವೇ ಗುರು.
ಮನಸ್ಸು ಮತ್ತು ಅರಿವಿನ
ಹೊಯ್ದಾಟದ ಜೀವನ
ಕೆಲವೊಮ್ಮೆ ಮನಸ್ಸು ಮುಂದು;
ಇನ್ನೊಮ್ಮೆ ತಿಳಿವೇ ಮುಂದು.
ಹೀಗೆ ಹಿಂದು-ಮುಂದಾಗಿ
ಎರಡು ರೇಖೆಗಳಂತೆ
ಸಾಗುವ ನಮ್ಮೊಳ
ಈ ದ್ವಯರು
ದಿಗಂತದಲ್ಲಿ ಒಂದಾಗಿ
ಲೀನವಾಗುವರು.
----------------------------
~ ಎನ್. ಭಾಸ್ಕರ್
ನನ್ನಲ್ಲಿ
ಬೆಳಗಲೆಂದು
ನೀ ಕೊಟ್ಟ
ಮಿಂಚು ಹುಳಗಳು
ಕಣ್ಣ ಮುಚ್ಚಿ
ಕುಳಿತಿವೆ
ಹಾರಾಡದೆ
ತನ್ಮಯವಾಗಿ
ಧ್ಯಾನದಲ್ಲಿ
ತಮ್ಮೆಲ್ಲ
ಬೆಳಕಿನ ಗುಚ್ಚದಲ್ಲಿ
ರಮಿಸಲು
ನಿನ್ನಂತೆ
ನೀ ನಿರದ ಹೊತ್ತಿನಲ್ಲಿ.
-------------------------
~ ಭಾಸ್ಕರ